Karnataka News
ಬೆಳಗಾವಿ ನಗರದ ಈ ಏರಿಯಾಗಳಲ್ಲಿ ಈ ರವಿವಾರ ದಿನಾಂಕ ೩ ರಂದು ಕರೆಂಟ್ ಇರಲ್ಲ

ಬೆಳಗವಿ ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿರುವುದರಿಂದ ನೆಹರು ನಗರದ ವಿದ್ಯುತ್ ಪರಿವರ್ತಕ ಕೇಂದ್ರದಿ0ದ ಹೊರಡುವ ಪರಿವರ್ತಕಗಳ ಮೇಲೆ ಬರುವ ಸ್ಥಳಗಳಲ್ಲಿ ದಿನಾಂಕ ೦೩-೦೭-೨೦೨೨ ರಂದು ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಗಾವಿ ನಗರದಲ್ಲಿ ಸ್ಮಾರ್ಟ್ ಸಿಟಿ ಕೆಲಸ ಕೈಗೊಳ್ಳುತ್ತಿರುವುದರಿಂದ ನೆಹರು ನಗರದ ೧೧೦/೩೩/೧೧ ಕೆವಿ ವಿದ್ಯುತ್ವಿತರಣಾ ಕೇಂದ್ರದಿ0ದ ಹೊರಡುವ ಸದರಿ ಪೂರಕಗಳ ಮೇಲೆ ಬರುವ ಪ್ರದೇಶಗಳಲ್ಲಿ ವಿದ್ಯುತ್ ದಿನಾಂ ೦೩-೦೭-೨೦೨೨ರಂದು ರವಿವಾರ ಮುಂಜಾನೆ ೧೦ ಗಂಟೆಯಿ0ದ ಸಾಯಂಕಾಲ ೫ ಗಂಟೆಯ ವರೆಗೆ ನಿಲುಗಡೆಯಾಗಲಿದೆ ಎಂದು ಹೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ಈ ವೇಳೆ ನಗರದ ಆರ್ಬಿಎಲ್ ಬ್ಯಾಂಕ್, ಮೆಹೆತಾ ಅಪಾರ್ಟ್ಮೆಂಟ್, ಸೆಂಟ್ರಲ್ ಎಕ್ಸೆಚೇಂಜ್, ಆಫೀಸ್, ಬಸವಕಾಲನಿ ಪರಿವರ್ತಕ ಮೊದಲಾದ ಸ್ಥಳಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಹೆಸ್ಕಾಂ ಕಾರ್ಯನಿರ್ವಾಹಕ ಇಂಜನೀಯರ್ ತಿಳಿಸಿದ್ದಾರೆ.