fbpx
Karnataka News

Good News: ‘SC, ST ಸಮುದಾಯ’ದವರಿಗೆ ಗುಡ್ ನ್ಯೂಸ್: ಈ ಕೆಲಸಕ್ಕೆ ‘ಗ್ರಾಪಂ’ಯಿಂದ ಸಿಗುತ್ತೆ ‘5 ಸಾವಿರ ಸಹಾಯಧನ’

ಬೆಂಗಳೂರು: ರಾಜ್ಯದ ಗ್ರಾಮಪಂಚಾಯ್ತಿ ನಿಧಿಯಲ್ಲಿ ಶೇ.25ಕ್ಕಿಂತ ಕಡಿಮೆ ಇರದಷ್ಟು ಮೊತ್ತವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕಲ್ಯಾಣ ಕಾರ್ಯಕ್ರಮಗಳಿಗೆ ವಿನಿಯೋಗಿಸಬಹುದಾಗಿದೆ. ಈ ಮೊತ್ತದಲ್ಲಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎಸ್ಸಿ, ಎಸ್ಟಿ ವರ್ಗದ ಹೆಣ್ಣುಮಕ್ಕಳ ಸರಳ ಮದುವೆ, ಶವಸಂಸ್ಕಾರಕ್ಕೆ ರೂ.5,000 ಸಹಾಯಧನ ಸಿಗಲಿದೆ.

 

ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಜಾಯತ್ ರಾಜ್ ಇಲಾಖೆಯ ಸರ್ಕಾರ ಉಪ ಕಾರ್ಯದರ್ಶಿಗಳು ದಿನಾಂಕ 31-01-2017ರಲ್ಲಿ ಸುತ್ತೋಲೆ ಹೊರಡಿಸಿದ್ದಾರೆ. ಈ ಸುತ್ತೋಲೆಯಂತೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 213ರಡಿ ಗ್ರಾಮ ಪಂಚಾಯ್ತಿಗಳಿಗೆ ಎಲ್ಲಾ ಮೂಲಗಳಿಂದ ಲಭ್ಯವಾಗುವ ಅನುದಾನಗಳಲ್ಲಿ ಶೇ.25ಕ್ಕಿಂತ ಕಡಿಮೆ ಇಲ್ಲದಂತೆ ಪರಿಶಿಷ್ಟ ಜಾತಿ ಮತ್ತು ಪಂಗಡವರ ಕಲ್ಯಾಣ ಕಾರ್ಯಕ್ರಮಗಳಿಗಾಗಿ ವಿನಿಯೋಗಿಸುವ ಬಗ್ಗೆ ಈ ಕೆಳಕಂಡಂತೆ ಮಾರ್ಗಸೂಚಿಗಳ್ನು ಹೊರಡಿಸಿದ್ದಾರೆ.

 

  • ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಹೆಣ್ಣುಮಕ್ಕಳ ಸರಳ ಮದುವೆಗೆ ರೂ.5,000 ಸಹಾಯಧನ ನೀಡಬಹುದು.
  • ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎಸ್ಸಿ, ಎಸ್ಟಿ ವರ್ಗದವರ ಶವ ಸಂಸ್ಕಾರಕ್ಕೆ ರೂ.5,000 ಸಹಾಯಧನ ನೀಡಬಹುದು

ಮುಂದುವರೆದು ಈ ಮಾರ್ಗಸೂಚಿಗಳ ಜೊತೆಗೆ, ಗ್ರಾಮ ಪಂಚಾಯ್ತಿಗಳಲ್ಲಿ ಎಸ್ಸಿ, ಎಸ್ಟಿ ವರ್ಗದ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಮೀಸಲಿರಿಸಿರುವ ಶೇ.25ರ ಅನುದಾನವನ್ನು ಈ ಕೆಳಕಂಡ ಉದ್ದೇಶಕ್ಕೂ ಉಪಯೋಗಿಸಬಹುದಾಗಿದೆ ಎಂದಿದ್ದಾರೆ.

  • ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪಂಗಡದವರು ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ನಿಯಮ 94ಸಿ ಹಾಗೂ ಫಾರ್ಮ್-50, 53 ಪ್ರಕರಣಗಳಲ್ಲಿ ಭರಿಸಬೇಕಾದ ವಾಸ್ತವ ಶುಲ್ಕವನ್ನು ಪಾವತಿಸುವುದು ಎಂದು ತಿಳಿಸಿದ್ದಾರೆ.

 

flash24x7.com

Tousif M Mulla National President public Rights Cell International Humanity Rights & Media Organizationn Karnataka Human Rights Awareness Forum Mumbai Karnataka Mainorite President Karnataka Human Rights Panel Belagavi District Vice President 99Indianews Belagavi District Reporter Indian News Voice Of Nation INVN News

Related Articles

Leave a Reply

Your email address will not be published. Required fields are marked *

error: Content is protected !!
%d bloggers like this: