fbpx
EducationKarnataka News

ಭೀಮ್ಸ್ ಆಸ್ಪತ್ರೆ : ಮಕ್ಕಳ ಹೈಟೆಕ್ ವಾರ್ಡ ಉದ್ಘಾಟಿಸಿದ ಶಾಸಕ ಅನಿಲ ಬೆನಕೆ

ದೇಶದಲ್ಲೇ ಬೆಳಗಾವಿ ಜಿಲ್ಲಾಸ್ಪತ್ರೆ ಎಲ್ಲರಿಗೂ ಮಾದರಿ ಆಗಲಿ, ದೇಶದಲ್ಲೇ ಸರ್ಕಾರಿ ಆಸ್ಪತ್ರೆಗಳ ಪೈಕಿ ಬೆಳಗಾವಿಯ ಬಿಮ್ಸ್ ಆಸ್ಪತ್ರೆ ಇಂದು 12ನೇ ಸ್ಥಾನದಲ್ಲಿದ್ದು, ಬರುವ ಒಂದು ವರ್ಷದಲ್ಲಿ ಬಿಮ್ಸ್ ಆಸ್ಪತ್ರೆಯನ್ನು 5 ನೇ ಸ್ಥಾನಕ್ಕೆ ತರಲು ಎಲ್ಲ ತರಹದ ಸೌಲಭ್ಯ ಕಲ್ಪಿಸಲು ಶ್ರಮಿಸಲಾಗುವು.
ಶುಕ್ರವಾರ ನಗರದ ಬಿಮ್ಸ್ ಆಸ್ಪತ್ರೆಯ ಆವರಣದಲ್ಲಿ ಸಹಾಯ ವಾಣಿ, ಅನ್ ಲೈನ್ ಪಾವತಿ ಕೌಂಟರ್, ಹೆಲ್ತ ಡೆಸ್ಕ್, ಹಿರಿಯ ನಾಗರಿಕರ ಮತ್ತು ವಿಶೇಷಚೇತನರ ಕೌಂಟರ್, ಬಿಮ್ಸ್ ಸಿಬ್ಬಂದಿಗಳಿಗೆ ಶಿಸು ವಿಹಾರ, ನವಿಕರಣವಾದ ಪೆಟ್ರಾರ್ಟಿಕ್ ವಾರ್ಡ್ ಉದ್ಘಾಟನೆ ಮಾಡಲಾಯಿತು. ಬಳಿಕ ಬಿಮ್ಸ್ ಸಭಾಗ್ರಹದಲ್ಲಿ ಎಸ್ ಸಿ/ ಎಸ್ ಟಿ ವಿದ್ಯಾರ್ಥಿಗಳಿಗೆ ಲಾಪ್ ಟಾಪ್ ವಿತರಣೆ ಪ್ರಾದೇಶಿಕ ಆಯುಕ್ತರು ಹಾಗೂ ಬಿಮ್ಸ್ ಆಡಳಿತ ಮಂಡಳಿ ಉಪಸ್ಥಿತಿಯಲ್ಲಿ ನಡೆಯಿತು.
ಪ್ರಾದೇಶಿಕ ಆಯುಕ್ತರು ಬಿಮ್ಸ್ ಆಸ್ಪತ್ರೆಯ ಚಾರ್ಜ್ ತಗೊಂಡ ಬಳಿಕ ಬಿಮ್ಸ್ ಸುಧಾರಣೆ ಆಗಿದೆ. 6 ತಿಂಗಳಿನಿಂದ ಬಿಮ್ಸ್ ಆಸ್ಪತ್ರೆ ತುಂಬಾ ಸುಧಾರಣೆ ಆಗಿದೆ. ನಿರಂತರ ಪ್ರಯತ್ನದಿಂದ ಬಿಮ್ಸ್ ಆಸ್ಪತ್ರೆ ಸುಧಾರಣೆ ಆಗಿದೆ. ಮನುಷ್ಯನಿಗೆ ಇಚ್ಛಾಶಕ್ತಿ ಇದ್ರೆ ಎಲ್ಲವೂ ಸಾಧ್ಯ ಹಾಗೂ ಪ್ರಾದೇಶಿಕ ಆಯುಕ್ತರು ನನಗೆ ಪ್ರೇರಣೆ.
ಈ ಆಸ್ಪತ್ರೆ ಬೆಳಗಾವಿಗೆ ಸೀಮಿತ ಅಲ್ಲ.‌ ಅಕ್ಕಪಕ್ಕದ ರಾಜ್ಯಗಳಾದ ಗೋವಾ, ಮಹಾರಾಷ್ಟ್ರ ಜನರು ನಮ್ಮ ಆಸ್ಪತ್ರೆಯ ಬಗ್ಗೆ ಇಂದು ಪ್ರಶಂಷೆ ವ್ಯಕ್ತ ಪಡಿಸುತ್ತಿದ್ದಾರೆ.
ಬಿಮ್ಸ್ ಆಸ್ಪತ್ರೆಯು ಮೂಲಭುತ ಸೌಲಭ್ಯದಲ್ಲಿ 5ನೇ ಸ್ಥಾನದಲ್ಲಿದೆ. ಆಸ್ಪತ್ರೆಯ ಎಲ್ಲಾ ಕಾರ್ಯಗಳು ಸರಿಯಾದ ಸಮಯಕ್ಕೆ ಆಗಬೇಕು.‌ ಈಗಾಗಲೇ ಕಾಮಗಾರಿ ಹಂತದಲ್ಲಿರು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯು ಐದಾರು ತಿಂಗಳಲ್ಲಿ ಜನರ ಉಪಯೋಗಕ್ಕೆ ಬರಲಿದೆ. ತಾಯಿ-ಮಕ್ಕಳ ಆಸ್ಪತ್ರೆಯ ಕಾಮಗಾರಿ ಶೀಘ್ರದಲ್ಲೇ ಆರಂಭ ಆಗಲಿದೆ. ಜೊತೆಗೆ ನರ್ಸಿಂಗ್ ಟ್ರೈನಿಂಗ್ ಸೆಂಟರ್ ಆರಂಭ ಆಗಲಿದೆ.
ಬಳಿಕ ಮಾತನಾಡಿದ ಪ್ರಾದೇಶಿಕ ಆಯುಕ್ತರಾದ ಶ್ರೀ ಆದಿತ್ಯ ಅಮ್ಲಾನ್ ಬಿಸ್ವಾಸ್ ಅವರು, ಯಾರು ನಿರ್ಗತಿಕರು ಇದ್ದಾರೆ, ಯಾರಿಗೆ ಸಹಾಯ ಸಿಗುವುದಲ್ಲ ಅಂತವರ ಬಗ್ಗೆ ವ್ಯವಸ್ಥಿತವಾಗಿ ಕಾಳಜಿ ವಹಿಸಬೇಕು.‌ ಜನರ ಬಗ್ಗೆ ಕಾಳಜಿ, ನಿಷ್ಠೆ, ಪ್ರಾಮಣಿಕತೆಯಿಂದ ಕೆಲಸ ಮಾಡಬೇಕು ಎಂದು ತಿಳಿಸಿದರು.
ಇಂದು ಎಲ್ಲರ ಶ್ರಮದಿಂದ ಬಿಮ್ಸ್ ಬದ್ಧತೆಯ ಸಾಮಾಜಿಕ ಸಂಸ್ಥೆಯಾಗಿದೆ. ಇಡೀ ದೇಶದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ನಮ್ಮ ಬಿಮ್ಸ್ 12 ನೇ ಸ್ಥಾನ ಪಡೆದುಕೊಂಡಿದೆ. ಅದರಲ್ಲೂ ಮೂಲಭುತ ಸೌಕರ್ಯದಲ್ಲಿ ಐದನೇ ಸ್ಥಾನದಲ್ಲಿ ಪಡೆದುಕೊಂಡಿದೆ. ಹಾಗೂ ಅಕ್ಯಾಡೆಮಿಕ್ ವಾಗಿ 9 ನೇ ಸ್ಥಾನದಲ್ಲಿದೆ ಎಂದು ಹರ್ಷ ವ್ಯಕ್ತ ಪಡಿಸಿದರು.‌
ಈ ವೇಳೆ ಬಿಮ್ಸ್ ಆಸ್ಪತ್ರೆಯ ಪ್ರಭಾರಿ ನಿರ್ದೇಶಕರಾದ ಶ್ರೀ ಈರಣ್ಣ ಪ್ರಭೇದ, ವೈಧ್ಯಕೀಯ ಅಧ್ಯಕ್ಷರಾದ ಶ್ರೀ ಎಬಿ ಪಾಟೀಲ್, ಬಿಮ್ಸ್ ಸಿಇಓ ಡಾ ಶಾಹಿದಾ ಆಫ್ರಿನ್, ಜಿಲ್ಲಾ ಶಸ್ತ್ರಚಿಕಿತ್ಸಕರು, ನಗರ ಸೇವಕರು ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

flash24x7.com

Tousif M Mulla National President public Rights Cell International Humanity Rights & Media Organizationn Karnataka Human Rights Awareness Forum Mumbai Karnataka Mainorite President Karnataka Human Rights Panel Belagavi District Vice President 99Indianews Belagavi District Reporter Indian News Voice Of Nation INVN News

Related Articles

Leave a Reply

Your email address will not be published. Required fields are marked *

error: Content is protected !!
%d