fbpx
EntertainmentKarnataka NewsLatest

ರುದ್ರ ರಮಣೀಯವಾಗಿ ಧುಮ್ಮುಕ್ಕುತ್ತಿರುವ ಗೋಕಾಕ ಜಲಪಾತ: ಫೋಟೊಗಾಗಿ ಯುವಕ, ಯುವತಿಯರ ಹುಚ್ಚಾಟ

ಗೋಕಾಕ: ರುದ್ರ ರಮಣೀಯವಾಗಿ ಧುಮ್ಮುಕ್ಕುತ್ತಿರುವ ಗೋಕಾಕ ಜಲಪಾತ ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡೇ ಬರುತ್ತಿದೆ. ಕೆಲವು ಯುವಕ, ಯುವತಿಯರು ಅಪಾಯವನ್ನೂ ಲೆಕ್ಕಿಸದೆ ಸೆಲ್ಫಿ, ಫೋಟೊಗಾಗಿ ಜಲಪಾತದ ಅಂಚಿಗೆ ಮೈಯೊಡ್ಡುತ್ತಿದ್ದಾರೆ.

180 ಅಡಿ ಎತ್ತರದಿಂದ ನೀರು ಭೋರ್ಗರೆಯುತ್ತಿದೆ. ಅದರೊಂದಿಗೆ ರಭಸದ ಗಾಳಿಯೂ ಇದೆ. ಅಂಥದರಲ್ಲೂ ಜಲಪಾತದ ಮೇಲಿನಿಂದ ತುತ್ತತುದಿಗೆ ತೆರಳಿ ಫೋಟೊಗೆ ಪೋಸ್ ನೀಡುವುದು ನಿರಂತರವಾಗಿ ನಡೆದಿದೆ. ಮತ್ತೆ ಕೆಲವರು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಜಲಪಾತದ ಇಳಿಜಾರಿಗೆ ಹೋಗಿ ನಿಲ್ಲುತ್ತಿದ್ದಾರೆ.

ಕಳೆದ ಒಂದು ವಾರದಿಂದ ಮಹಾರಾಷ್ಟ್ರದ ಪಶ್ಚಿಮ ಘಟ್ಟಪ್ರದೇಶ ಮತ್ತು ಜಿಲ್ಲೆಯಲ್ಲಿ ನಿರಂತರ ಮಳೆ ಬೀಳುತ್ತಿದೆ. ಇದರಿಂದ ಅಪಾರ ಪ್ರಮಾಣದ ನೀರು ಜಲಪಾತಕ್ಕೆ ಹರಿದುಬರುತ್ತಿದೆ.

ಕೆಲವರಂತೂ ಜಲಪಾತದ ಮೇಲಿನ ಬಂಡೆಗಳ ಕಂದಕಗಳ ಮಧ್ಯೆ ನಿಂತು ಫೋಟೊ ತೆಗೆಸಿಕೊಳ್ಳುವ ಸಾಹಸ ಮಾಡುವುದು ಸಾಮಾನ್ಯವಾಗಿದೆ.

ಆದರೂ ಈವರೆಗೆ ಸ್ಥಳದಲ್ಲಿ ಭದ್ರತೆಗೆ ಸಿಬ್ಬಂದಿ ನಿಯೋಜಿಸಿಲ್ಲ. ಅಪಾಯಕಾರಿ ಹೆಜ್ಜೆ ಇಡುವವರ ಮೇಲೆ ನಿಯಂತ್ರಣ ಇಲ್ಲ.

ಕಳೆದ ಅಕ್ಟೋಬರಿನಲ್ಲಿ ಇದೇ ರೀತಿ ಸೆಲ್ಫಿ ತೆಗೆದುಕೊಳ್ಳಲು ಹೋದ ಯುವಕ ಜಲಪಾತದ ಬೃಹತ್ ಬಂಡೆಗಳ ಮಧ್ಯದ ಕಂದಕಕ್ಕೆ ಬಿದ್ದಿದ್ದ. ಆತನನ್ನು ರಕ್ಷಿಸಲು ತಾಲ್ಲೂಕು ಆಡಳಿತ ಹರಸಾಹಸ ಮಾಡಬೇಕಾಗಿ ಬಂದಿತ್ತು.

ಎರಡು ವರ್ಷಗಳ ಹಿಂದೆ ಕೂಡ ಇಬ್ಬರು ಪ್ರವಾಸಿಗರು ಪ್ರಾಣ ಕಳೆದುಕೊಂಡರು.

ಪ್ರತಿ ವರ್ಷ ಒಂದಲ್ಲ ಒಂದು ಅವಘಡ ಸಂಭವಿಸುವುದು ಇಲ್ಲಿ ಸಾಮಾನ್ಯವಾಗಿದೆ.

 

flash24x7.com

Tousif M Mulla National President public Rights Cell International Humanity Rights & Media Organizationn Karnataka Human Rights Awareness Forum Mumbai Karnataka Mainorite President Karnataka Human Rights Panel Belagavi District Vice President 99Indianews Belagavi District Reporter Indian News Voice Of Nation INVN News

Related Articles

Leave a Reply

Your email address will not be published. Required fields are marked *

error: Content is protected !!
%d bloggers like this: