fbpx
Feature articlesKarnataka NewsNationalPolitics

ಏನಿದು ಘಟನೆ? Video: ತಮ್ಮನ ಶವ ಮಡಿಲಲ್ಲಿಟ್ಟುಕೊಂಡು ಆಯಂಬುಲೆನ್ಸ್‌ಗಾಗಿ ರಸ್ತೆ ಬದಿ ಕಾದು ಕುಳಿತ ಬಾಲಕ.

ಭೋಪಾಲ್ (ಮಧ್ಯಪ್ರದೇಶ): ಮಧ್ಯಪ್ರದೇಶದ ಮೊರೆನಾ ಪಟ್ಟಣದಲ್ಲಿ ಕಣ್ಣಂಚಲ್ಲಿ ನೀರು ತರಿಸುವ ಘಟನೆಯೊಂದು ನಡೆದಿದೆ. ಮೃತಪಟ್ಟ ಮಗನ ಶವವನ್ನು ಮನೆಗೆ ಕೆರೆದೊಯ್ಯಲು ತಂದೆ ವಾಹನ ಹುಡುಕುತ್ತಿದ್ದರೆ, ಇತ್ತ 8 ವರ್ಷದ ಬಾಲಕ ತನ್ನ ಸಹೋದರನ ಶವವನ್ನು ಮಡಿಲಲ್ಲಿ ಮಲಗಿಸಿಕೊಂಡು ರಸ್ತೆ ಬದಿ ಕುಳಿತಿರುವ ದೃಶ್ಯ ಕಂಡುಬಂದಿದೆ.

 

ಸ್ಥಳೀಯ ಪತ್ರಕರ್ತರೊಬ್ಬರು ಚಿತ್ರೀಕರಿಸಿದ ದೃಶ್ಯಗಳಲ್ಲಿ, ತಂದೆ ಪೂಜಾರಾಮ್ ಜಾತವ್ ಶವವನ್ನು ಮನೆಗೆ ಕರೆದೊಯ್ಯಲು ವಾಹನಕ್ಕಾಗಿ ತೀವ್ರವಾಗಿ ಹುಡುಕುತ್ತಿದ್ದರು. ಈ ಸಂದರ್ಭದಲ್ಲಿ 8 ವರ್ಷದ ಗುಲ್ಶನ್ ತನ್ನ 2 ವರ್ಷದ ಸಹೋದರ ರಾಜನ ಶವದೊಂದಿಗೆ ಕುಳಿತಿರುವುದು ಕಂಡುಬಂದಿದೆ.

 

ಏನಿದು ಘಟನೆ?

ಅಂಬಾಹ್‌ನ ಬದ್ಫ್ರಾ ಗ್ರಾಮದ ನಿವಾಸಿ ಪೂಜಾರಾಮ್ ಅವರ 2 ವರ್ಷದ ಮಗ ರಾಜ ರಕ್ತಹೀನತೆ ಮತ್ತು ಅಸ್ಸೈಟ್ಸ್‌ನಿಂದ ಬಳಲುತ್ತಿದ್ದ (ಇದು ದ್ರವದ ಶೇಖರಣೆಯಿಂದ ಉಂಟಾದ ಹೊಟ್ಟೆಯ ಊತ, ಹೆಚ್ಚಾಗಿ ಯಕೃತ್ತಿನ ಕಾಯಿಲೆಗೆ ಸಂಬಂಧಿಸಿದೆ). ಹೀಗಾಗಿ ಅವನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ವೈದ್ಯರ ಸಲಹೆ ಮೇರೆಗೆ 450 ಕಿಮೀ ದೂರದಲ್ಲಿರುವ ಮೊರೆನಾ ಜಿಲ್ಲಾ ಆಸ್ಪತ್ರೆಗೆ ರಾಜನನ್ನು ಕರೆದುಕೊಂಡು ಹೋಗಲಾಗಿತ್ತು. ಆದ್ರೆ, ಮಗು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಆದರೆ, ಅವರನ್ನು ಕರೆತಂದಿದ್ದ ಆಂಬ್ಯುಲೆನ್ಸ್ ಆಗಲೇ ಹಿಂತಿರುಗಿತ್ತು.

ನಂತ್ರ, ತನ್ನ ಗ್ರಾಮಕ್ಕೆ ಮೃತದೇಹವನ್ನು ಕೊಂಡೊಯ್ಯಲು ವಾಹನ ಬೇಕೆಂದು ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗೆ ಪೂಜಾರಾಮ್ ಮನವಿ ಮಾಡಿದರು. ಆದ್ರೆ, ಇದಕ್ಕೆ ಯಾವುದೇ ಅಧಿಕಾರಿಗಳು ಹೆಚ್ಚುವರಿಯಾಗಿ 1,500 ರೂ. ಹಣ ಪಾವತಿಸಬೇಕಾಗುತ್ತದೆ ಎಂದಿದ್ದಾರೆ. ಅಷ್ಟೊಂದು ಹಣವಿಲ್ಲದ ಪೂಜಾರಾಮ್ ಏರೆ ವಾಹನದ ವ್ಯವಸ್ಥೆಗೆಂದು ಅಲೆದಾಡುತ್ತಿದ್ದರು. ಈ ವೇಳೆ ಮೊರೆನಾದ ನೆಹರೂ ಪಾರ್ಕ್‌ನ ರಸ್ತೆ ಮುಂದೆ 8 ವರ್ಷದ ಬಾಲಕ ತನ್ನ ತಮ್ಮನ ಮೃತದೇಹವನ್ನು ತನ್ನ ಮಡಿಲಲ್ಲಿ ಮೇಲೆ ಮಲಗಿಸಿಕೊಂಡಿರುವ ದೃಶ್ಯ ಕಂಡುಬಂದಿದೆ.

ಈ ಬಗ್ಗೆ ಅಲ್ಲಿದ್ದ ಜನರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಕೊತ್ವಾಲಿ ಠಾಣೆಯ ಪೊಲೀಸ್​ ಅಧಿಕಾರಿ ಯೋಗೇಂದ್ರ ಸಿಂಗ್ ಸ್ಥಳಕ್ಕೆ ಆಗಮಿಸಿ, ಬಾಲಕನ ಮಡಿಲಿನಲ್ಲಿದ್ದ ಮೃತ ದೇಹವನ್ನು ಎತ್ತಿಕೊಂಡು ಆಸ್ಪತ್ರೆಯೊಳಗೆ ಕರೆದೊಯ್ದು ಅಲ್ಲಿನ ಸಿಬ್ಬಂದಿಗಳ ನಡತೆಗೆ ಛೀ ಮಾರಿ ಹಾಕಿದ್ದಾರೆ. ನಂತ್ರ ಆಯಂಬುಲೆನ್ಸ್ ವ್ಯವಸ್ಥೆ ಮಾಡಿ ಬಾಲಕನ ಮೃತದೇಹವನ್ನು ಗ್ರಾಮಕ್ಕೆ ತಲುಪಿಸುವ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.

 

flash24x7.com

Tousif M Mulla National President public Rights Cell International Humanity Rights & Media Organizationn Karnataka Human Rights Awareness Forum Mumbai Karnataka Mainorite President Karnataka Human Rights Panel Belagavi District Vice President 99Indianews Belagavi District Reporter Indian News Voice Of Nation INVN News

Related Articles

Leave a Reply

Your email address will not be published. Required fields are marked *

error: Content is protected !!
%d bloggers like this: