fbpx
InternationalKarnataka NewsNational

ವಿಜಯ್ ಮಲ್ಯಗೆ 4 ತಿಂಗಳು ಜೈಲು, 2 ಸಾವಿರ ರೂ. ದಂಡ ವಿಧಿಸಿದ ಸುಪ್ರೀಂಕೋರ್ಟ್; ಯಾವ ಕೇಸ್ ಇದು?

40 ಮಿಲಿಯನ್ ಡಾಲರ್ ವರ್ಗಾಯಿಸಿದ್ದ ವಿಜಯ್ ಮಲ್ಯ

2017ರಲ್ಲಿನ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿ ಭಾರತದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯಗೆ (Vijay Mallya) ಸುಪ್ರೀಂ ಕೋರ್ಟ್ ನಾಲ್ಕು ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ವಿಜಯ್ ಮಲ್ಯ ಅಪದೇ ಪದೇ ಹಾಜರಾಗದಿರುವ ಬಗ್ಗೆ ಕೆರಳಿದ ಸುಪ್ರೀಂ ಕೋರ್ಟ್ (Supreme Court On Vijay Mallya) ‘Guilty Gf Contempt’ ಎಂದು ನಿರ್ಧರಿಸಿದ್ದು ಅವರಿಗೆ 2,000 ರೂಪಾಯಿ ದಂಡವನ್ನೂ ವಿಧಿಸಿದೆ.
ದಂಡವನ್ನು ಸಕಾಲದಲ್ಲಿ ಠೇವಣಿ ಮಾಡದಿದ್ದರೆ ವಿಜಯ್ ಮಲ್ಯ ಇನ್ನೂ ಎರಡು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಖಡಕ್ ಆಗಿ ಆದೇಶಿಸಿದೆ. “ವಿಜಯ್ ಮಲ್ಯ ಯಾವುದೇ ಪಶ್ಚಾತ್ತಾಪವನ್ನು ವ್ಯಕ್ತಪಡಿಸಲಿಲ್ಲ” ಎಂದು ನ್ಯಾಯಾಲಯವು ತನ್ನ ಆದೇಶವನ್ನು ಅಂಗೀಕರಿಸುವಾಗ ಗಮನಿಸಿದ್ದಾಗಿ ತಿಳಿಸಿದೆ.

ಯಾವ ಪ್ರಕರಣ ಇದು?
2017ರ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಇಂದು ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಪ್ರಕಟಿಸಬೇಕಿತ್ತು. ಎಸ್‌ಬಿಎಂ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ಆದೇಶ ಪ್ರಕಟಿಸಿದೆ. ಇಂಗ್ಲೆಂಡ್​ನಲ್ಲಿರುವ ಉದ್ಯಮಿ ವಿಜಯ್ ಮಲ್ಯ ಈ ಪ್ರಕರಣಕ್ಕೆ ಸಂಬಂಧಿಸಿ ಯಾವುದೇ ಪ್ರತಿಕ್ರಿಯೆಯನ್ನೂ ನೀಡಿರಲಿಲ್ಲ. ಅಲ್ಲದೇ ಕೋರ್ಟ್ ಎದುರು ಸಹ ಹಾಜರಾಗಿರಲಿಲ್ಲ. ವಿಜಯ್ ಮಲ್ಯ ಪರ ವಕೀಲರು ಸಹ ಈ ವಿಷಯವನ್ನು ಕೋರ್ಟ್ ಗಮನಕ್ಕೆ ತಂದ ನಂತರ ಈ ಆದೇಶ ಪ್ರಕಟಿಸಲಾಗಿದೆ.
 

40 ಮಿಲಿಯನ್ ಡಾಲರ್ ವರ್ಗಾಯಿಸಿದ್ದ ವಿಜಯ್ ಮಲ್ಯ
ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸಿ 2017ರಲ್ಲಿ ದೇಶ ಬಿಟ್ಟು ಹೋಗಿದ್ದ ಉದ್ಯಮಿ ವಿಜಯ್ ಮಲ್ಯ ನಂತರ ತಮ್ಮ ಮಕ್ಕಳಿಗೆ 40 ಮಿಲಿಯನ್ ಡಾಲರ್ ವರ್ಗಾಯಿಸಿದ್ದರು. ಈ ಪ್ರಕರಣದಲ್ಲಿ ವಿಜಯ್ ಮಲ್ಯ ತಪ್ಪಿತಸ್ಥ ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಜೊತೆಗೆ ಇಂದು ಸುಪ್ರೀಂ ಕೋರ್ಟ್ ಶಿಕ್ಷೆಯ ಪ್ರಮಾಣವನ್ನು ಘೋಷಿಸಿದೆ.

ನಡವಳಿಕೆ ಬಗ್ಗೆ ಪಶ್ಚಾತ್ತಾಪ ತೋರಿಸದ ಉದ್ಯಮಿ
‘ ಉದ್ಯಮಿ ವಿಜಯ್ ಮಲ್ಯ ತಮ್ಮ ನಡವಳಿಕೆ ಬಗ್ಗೆ ಪಶ್ಚಾತ್ತಾಪ ತೋರಿಸಲಿಲ್ಲ. ಶಿಕ್ಷೆಯ ವಿಚಾರಣೆಯ ಸಮಯದಲ್ಲಿ ಹಾಜರಾಗಲಿಲ್ಲ. ಕಾನೂನಿನ ಘನತೆ ಎತ್ತಿಹಿಡಿಯಲು ಅವರಿಗೆ ಶಿಕ್ಷೆ ವಿಧಿಸಬೇಕು’ ಎಂದು ಬ್ಯಾಂಕ್ ಒಕ್ಕೂಟದ ಪರ ವಕೀಲರು ವಾದ ಮಂಡನೆ ಮಾಡಿದ್ದರು. ಬ್ಯಾಂಕ್ ಒಕ್ಕೂಟದ ವಾದ ಪುರಸ್ಕರಿಸಿ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ.

8% ಬಡ್ಡಿಯಂತೆ 40 ಮಿಲಿಯನ್ ಯುಎಸ್ ಡಾಲರ್‌ ಪಾವತಿಸಲು ಸೂಚನೆ
ಬ್ಯಾಂಕುಗಳಿಗೆ 40 ಮಿಲಿಯನ್ ಡಾಲರ್‌ ನೀಡುವಂತೆ ಉದ್ಯಮಿ ವಿಜಯ್ ಮಲ್ಯಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. 40 ಮಿಲಿಯನ್ ಯುಎಸ್ ಡಾಲರ್‌ ಗೆ 8% ಬಡ್ಡಿ ನೀಡಲು ಸೂಚನೆ ನೀಡಿದೆ. ಹಣ ನೀಡಲು ವಿಜಯ್ ಮಲ್ಯಗೆ 4 ವಾರಗಳ ಕಾಲಾವಕಾಶ ನೀಡಿರುವ ದೇಶದ ಸರ್ವೋಚ್ಛ ನ್ಯಾಯಾಲಯ ಹಣ ನೀಡದಿದ್ದರೆ ಆಸ್ತಿಗಳ ಅಟ್ಯಾಚ್ಮೆಂಟ್ ಮಾಡುವುದಾಗಿ ಎಚ್ಚರಿಕೆಯನ್ನು ಸಹ ಉದ್ಯಮಿ ವಿಜಯ್ ಮಲ್ಯಗೆ ವಿಧಿಸಿದೆ.

flash24x7.com

Tousif M Mulla National President public Rights Cell International Humanity Rights & Media Organizationn Karnataka Human Rights Awareness Forum Mumbai Karnataka Mainorite President Karnataka Human Rights Panel Belagavi District Vice President 99Indianews Belagavi District Reporter Indian News Voice Of Nation INVN News

Related Articles

Leave a Reply

Your email address will not be published. Required fields are marked *

error: Content is protected !!
%d bloggers like this: