ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಬೆಳಗಾವಿ ಜಿಲ್ಲೆಯ ವಿವಿಧ ಕಡೆ ಜುಲೈ 16ರಂದು ವಿದ್ಯುತ್ ಅದಲಾತ್

ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಇದೇ ಜುಲೈ 16ರಂದು ಬೆಳಗಾವಿ ವೃತ್ತ ವ್ಯಾಪ್ತಿಯಲ್ಲಿ ಆಯ್ದ ಸ್ಥಳಗಳಲ್ಲಿ ವಿದ್ಯುತ್ ಅದಲಾತ್ನ್ನು ಹಮ್ಮಿಕೊಳ್ಳಲಾಗಿದೆ.
ಸ್ಪಂದಿಸಿ ತಕ್ಷಣ ಪರಿಹಾರ ಕಲ್ಪಿಸುವುದಕ್ಕಾಗಿ ರಾಜ್ಯ ಸರ್ಕಾರ ಜಾರಿಗೆ ತರುತ್ತಿರುವ ಮಹತ್ವಾಕಾಂಕ್ಷಿಯ ಜನ ಸ್ನೇಹಿ ಯೋಜನೆಗಳಲ್ಲಿ ಇದು ಒಂದಾಗಿದೆ. ಶನಿವಾರ ಬೆಳಿಗ್ಗೆ 11 ಗಂಟೆಗೆ ಈ ಕೆಳಗಿನ ಸ್ಥಳಗಳಲ್ಲಿ ವಿದ್ಯುತ್ ಅದಾಲತ್ನ್ನು ಆಯೋಜಿಸಲಾಗಿದೆ.
ಬೆಳಗಾವಿ ವೃತ್ತ ವ್ಯಾಪ್ತಿಯ ಬೆಳಗಾವಿ ತಾಲ್ಲೂಕಿನಲ್ಲಿ ಬರುವ ಹಳ್ಳಿಗಳಾದ ಕಲ್ಲಾರಕೊಪ್ಪ, ದೇವಗೇರಿ, ಬೆಕ್ಕಿನಕಟ್ಟಿ, ಕರಳೆ, ಕಲಕಾಂಬ, ಅವಚಾರಟ್ಟಿ, ಮಣ್ಣೂರ ಮತ್ತು ಹೊನಗಾ. ಖಾನಾಪುರ ತಾಲ್ಲೂಕಿನಲ್ಲಿ ಬರುವ ಹಳ್ಳಿಗಳಾದ ಗೋಲಿಹಳ್ಳಿ, ಬೇಡರಹಟ್ಟಿ, ಹಲಕರ್ಣಿ, ಹೆಬ್ಬಾಳಹಟ್ಟಿ ಮತ್ತು ಕುಪಟಗಿರಿ.
ಬೈಲಹೊಂಗಲ ತಾಲ್ಲೂಕಿನಲ್ಲಿ ಬರುವ ಹಳ್ಳಿಗಳಾದ ಕುರಗುಂದ, ಹನುಮನಹಟ್ಟಿ, ಲಿಂಗದಳ್ಳಿ, ಜಕ್ಕನಾಯಕನಕೊಪ್ಪ. ಕಿತ್ತೂರು ತಾಲ್ಲೂಕಿನಲ್ಲಿ ಬರುವ ಹಳ್ಳಿಗಳಾದ ಚಿಕ್ಕನಂದಿಹಳ್ಳಿ.
ಸವದತ್ತಿ ತಾಲ್ಲೂಕಿನಲ್ಲಿ ಬರುವ ಹಳ್ಳಿಗಳಾದ ಹಿರೇಬುದನೂರ, ಕುರವಿನಕೊಪ್ಪ, ಹರಳಿಕಟ್ಟಿ, ಬೆನಕಟ್ಟಿ ಮತ್ತು ಕಲ್ಲಾಪುರ, ರಾಮದುರ್ಗ ತಾಲ್ಲೂಕಿನಲ್ಲಿ ಬರುವ ಹಳ್ಳಿಗಳಾದ ಕೆ-ತಿಮ್ಮಾಪುರ, ಚಿಕ್ಕಮೂಲಂಗಿ, ಮುದೇನೂರ ಮತ್ತು ಸರ್ವಾಪುರ.
ಗೋಕಾಕ ತಾಲ್ಲೂಕಿನಲ್ಲಿ ಬರುವ ಹಳ್ಳಿಗಳಾದ ಮಲ್ಲಾಪುರ-ಪಿಜಿ, ದಂಡಾಪುರ ಮತ್ತು ಕೈತನಾಳ. ಮೂಡಲಗಿ ತಾಲ್ಲೂಕಿನಲ್ಲಿ ಬರುವ ಹಳ್ಳಿಗಳಾದ ಕವರಟ್ಟಿ, ಮುಸುಗುಪ್ಪಿ, ಹೊಸಯರಗುದ್ರಿ ಮತ್ತು ಮುನ್ಯಾಳ ಗ್ರಾಮದಲ್ಲಿ ವಿದ್ಯುತ್ ಅದಾಲತ್ ಮೂಲಕ ಗ್ರಾಮೀಣ ವಿದ್ಯುತ್ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವುದಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಬೆಳಗಾವಿ ಹೆಸ್ಕಾಂ ಕಾರ್ಯ ವೃತ್ತದ ಅಧೀಕ್ಷಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.