fbpx
All Categories AdvertisementEntertainmentFeature articlesKarnataka NewsLatestNational
Trending

ಕಾಳಿ, ಹಿಡಕಲ್ ಡ್ಯಾಂ, ಆಲಮಟ್ಟಿ ಸೇರಿ ರಾಜ್ಯದ 9 ಕಡೆ ವಾಟರ್ ಏರೋಡ್ರಮ್ ನಿರ್ಮಾಣ

ಬೆಂಗಳೂರು – ಬೆಳಗಾವಿಯ ಹಿಡಕಲ್‌ ಡ್ಯಾಂ ಸೇರಿದಂತೆ ರಾಜ್ಯದ 9 ಕಡೆಗಳಲ್ಲಿ ವಾಟರ್ ಏರೋಡೋಮ್ ನಿರ್ಮಾಣ ಮಾಡಲು ಯೋಚಿಸಲಾಗಿದೆ ಎಂದು ವಸತಿ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ಅವರು ಸರ್ಕಾರವು ನಾಗರಿಕ ವಿಮಾನಯಾನ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ನಿರ್ಮಾಣ ಮಾಡಲಿದ. 9 ವಾಟರ್ ಏರೋಡೋಮ್‌ಗಳನ್ನು ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ ಎಂದು ಹೇಳಿದ್ದಾರೆ.

ಕೆಆರ್‌ಸ್‌, ಕಾಳಿ ನದಿ, ಬೈಂದೂರು, ಮಲ್ಪೆ, ಮಂಗಳೂರು, ತುಂಗಭದ್ರಾ, ಲಿಂಗನಮಕ್ಕಿ, ಆಲಮಟ್ಟಿ ಮತ್ತು ಹಿಡಕಲ್ ಜಲಾಶಯಗಳಲ್ಲಿ ವಾಟರ್ ಏರೋಡೋಮ್‌ಗಳ ಅಭಿವೃದ್ಧಿಗೆ ಸ್ಥಳಗಳನ್ನು ಗುರುತಿಸಲಾಗಿದೆ. ವಾಟರ್ ಏರೋಡೋಮ್ ಒಂದು ತೆರೆದ ನೀರಿನ ಸ್ಥಳವಾಗಿದ್ದು, ಸೀಪ್ಲೇನ್‌ಗಳು ಮತ್ತು ಉಭಯಚರ ವಿಮಾನಗಳು ಲ್ಯಾಂಡಿಂಗ್ ಮತ್ತು ಟೇಕ್-ಆಫ್‌ಗಳಿಗೆ ಬಳಸಬಹುದು.

ಭೂ-ಆಧಾರಿತ ವಿಮಾನ ನಿಲ್ದಾಣಗಳಿಗೆ ಹೋಲಿಸಿದರೆ ಅವುಗಳನ್ನು ಕಡಿಮೆ ವೆಚ್ಚ ಮತ್ತು ಸಮಯದಲ್ಲಿ ನಿರ್ಮಿಸಬಹುದು. ರನ್ ವೇ ನಿರ್ಮಾಣದ ಅಗತ್ಯವಿರುವುದಿಲ್ಲ.

ಸೀಪ್ಲೇನ್‌ಗಳು ಅಥವಾ ಉಭಯಚರ ವಿಮಾನಗಳು ಲ್ಯಾಂಡಿಂಗ್ ಮತ್ತು ಟೇಕ್‌ ಆಫ್‌ಗಾಗಿ ಬಳಸಬಹುದಾದ ತೆರೆದ ನೀರಿನ ಪ್ರದೇಶವನ್ನು ವಾಟರ್ ಏರೋಡೋಮ್ ಎಂದು ಕರೆಯಲಾಗುತ್ತದೆ. ಭೂಮಿಯಲ್ಲಿ ಟರ್ಮಿನಲ್ ಕಟ್ಟಡವನ್ನು ನಿರ್ಮಿಸಿ, ಅಲ್ಲಿ ವಿಮಾನವನ್ನು ಹಡಗಿನಂತೆ ನಿಲ್ಲಿಸಲು ವ್ಯವಸ್ಥೆ ಮಾಡಬಹುದು.

ಹಿಡಕಲ್ ಡ್ಯಾಮ್ ಪ್ರದೇಶವನ್ನು 148 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಉದ್ಯಾನದ ಮಾದರಿಯಲ್ಲಿ ಅತ್ಯದ್ಭುತ ಪ್ರವಾಸಿ ತಾಣವನ್ನಾಗಿಸಲು ಸಚಿವ ಉಮೇಶ ಕತ್ತಿ ಈಗಾಗಲೆ ಯೋಜಿಸಿದ್ದು, ವಾಟರ್ ಏರೋಡೋಮ್ ಇದಕ್ಕೆ ಇನ್ನಷ್ಟು ಮೆರಗು ನೀಡಲಿದೆ.

flash24x7.com

Tousif M Mulla National President public Rights Cell International Humanity Rights & Media Organizationn Karnataka Human Rights Awareness Forum Mumbai Karnataka Mainorite President Karnataka Human Rights Panel Belagavi District Vice President 99Indianews Belagavi District Reporter Indian News Voice Of Nation INVN News

Related Articles

Leave a Reply

Your email address will not be published. Required fields are marked *

error: Content is protected !!
%d bloggers like this: