fbpx
Crime NewsNational

Husband Murder: ಜೀನ್ಸ್ ಪ್ಯಾಂಟ್​​ಗಾಗಿ ಗಂಡನನ್ನೇ ಕೊಲೆ ಮಾಡಿದ ಹೆಂಡತಿ; ಜೀನ್ಸ್​​ ಜಗಳ ಕೊಲೆಯಲ್ಲಿ ಅಂತ್ಯ

ರಾಂಚಿ: ಮದುವೆಯಾದ (Marriage) ಬಳಿಕ ಗಂಡ-ಹೆಂಡತಿ (Husband and Wife) ಒಟ್ಟಿಗೆ ಜೀವನ ನಡೆಸುವಾಗ ಕೆಲವೊಂದಷ್ಟು ಅಡ್ಜೆಸ್ಟ್​ಮೆಂಡ್​ಗಳನ್ನ ಮಾಡಿಕೊಳ್ಳೋದು ಅನಿವಾರ್ಯ. ಭಾರತೀಯ ಮದುವೆಗಳಲ್ಲಿ ಹೆಣ್ಣು ಮದುವೆಯಾದ ಬಳಿಕ ಗಂಡನ ಮನೆಯಲ್ಲಿ ವಾಸಿಸಬೇಕು.
ಅಲ್ಲಿನ ರೀತಿರಿವಾಜುಗಳನ್ನು ಪಾಲಿಸಬೇಕು ಎಂದು ಬಹುತೇಕರು ಬಯಸುತ್ತಾರೆ. ಇನ್ನು ಗಂಡನಾದವನೂ ಸಹ ಹೆಂಡತಿ ಹೀಗೆಯೇ ಇರಬೇಕು ಎಂದು ನಿರ್ಬಂಧಗಳನ್ನು ಹೇರುತ್ತಾನೆ. ಮದುವೆಯಾದ ಬಳಿಕ ಕೆಲವೊಂದು ಬಟ್ಟೆಗಳನ್ನು ಧರಿಸಬಾರದು ಎಂದು ಕಂಡಿಷನ್​ ಹಾಕುವ ಗಂಡಂದಿರೂ ಇದ್ದಾರೆ. ಈ ಪ್ರಕರಣದಲ್ಲೂ ಆದೇ ಆಗಿದೆ. ಹೆಂಡತಿ ಜೀನ್ಸ್​ (Jeans) ಧರಿಸುವುದಕ್ಕೆ ಗಂಡ ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಹೆಂಡತಿ ಚಾಕುವಿನಿಂದ ಇರಿದು ಗಂಡನನ್ನು ಕೊಲೆ ಮಾಡಿಬಿಟ್ಟಿದ್ದಾಳೆ. ಕ್ಷುಲ್ಲಕ ಬಟ್ಟೆ ಜಗಳ ಭೀಕರ ಕೊಲೆಯಲ್ಲಿ ಕೊನೆಯಾಗಿದೆ. ಈ ಧಾರುಣ ಘಟನೆ ನಡೆದಿರೋದು ಜಾರ್ಖಂಡ್​ ರಾಜ್ಯದಲ್ಲಿ.

ಜೀನ್ಸ್​​ ಧರಿಸಿ ಜಾತ್ರೆಗೆ ಹೋಗಿದ್ದ ಹೆಂಡತಿ

ಜಾರ್ಖಂಡ್‌ನ ಜಮ್ತಾರಾದಲ್ಲಿ ಮದುವೆಯ ನಂತರ ಜೀನ್ಸ್ ಧರಿಸುವುದನ್ನು ತಡೆದಿದ್ದಕ್ಕೆ ಮಹಿಳೆಯೊಬ್ಬಳು ತನ್ನ ಪತಿಯನ್ನು ಚಾಕುವಿನಿಂದ ಇರಿದು ಕೊಂದಿದ್ದಾಳೆ. ಜಮ್ತಾರಾ ಪೊಲೀಸ್ ಠಾಣಾ ವ್ಯಾಪ್ತಿಯ ಜೋರ್ಭಿತ ಗ್ರಾಮದಲ್ಲಿ ಈ ಘಟನೆ ವರದಿಯಾಗಿದೆ. ಶನಿವಾರ ರಾತ್ರಿ, ಪುಷ್ಪಾ ಹೆಂಬ್ರೋಮ್ ಎಂಬ ವಿವಾಹಿತೆ ಜೀನ್ಸ್ ಧರಿಸಿ ಗೋಪಾಲಪುರ ಗ್ರಾಮದಲ್ಲಿ ಜಾತ್ರೆಯನ್ನು ನೋಡಲು ಹೋಗಿದ್ದರು. ಆಕೆ ಮನೆಗೆ ಹಿಂದಿರುಗಿದಾಗ, ಗಂಡ ಜೀನ್ಸ್​ ಧರಿಸಿ ಜಾತ್ರೆಗೆ ಹೋಗಿದ್ದನ್ನು ಪ್ರಶ್ನಿಸಿದ್ದಾನೆ. ಇದೇ ವಿಚಾರವಾಗಿ ದಂಪತಿ ಮಧ್ಯೆ ಜಗಳ ವಿಕೋಪಕ್ಕೆ ಹೋಗಿದೆ. ಏಕೆ ಜೀನ್ಸ್​ ಧರಿಸಬಾರದು ಎಂದು ಹೆಂಡತಿ ಪ್ರಶ್ನಿಸಿದ್ದಾಳೆ. ಜೀನ್ಸ್​ ಧರಿಸುವುದನ್ನು ಗಂಡ ಬಿಲ್​ಕುಲ್​ ಒಪ್ಪಿಲ್ಲ. ಗಂಡನ ಹೇಳಿಕೆಗಳು ವಾಗ್ವಾದಕ್ಕೆ ಕಾರಣವಾಯಿತು. ಕೋಪದ ಭರದಲ್ಲಿ ಪುಷ್ಪಾ ತನ್ನ ಗಂಡನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾಳೆ. ಆತ ತೀವ್ರವಾಗಿ ಗಾಯಗೊಂಡಿದ್ದಾರೆ.

ಜೀನ್ಸ್​​ ಜಗಳ ಕೊಲೆಯಲ್ಲಿ ಅಂತ್ಯ

ಕುಟುಂಬ ಸದಸ್ಯರು ತಕ್ಷಣ ಅವರನ್ನು ಧನ್‌ಬಾದ್ ಪಿಎಂಸಿಎಚ್‌ಗೆ ಕರೆದೊಯ್ದರು ಆದರೆ ಅಲ್ಲಿ ಸಾವನ್ನಪ್ಪಿದ್ದಾರೆ. ಮೃತರ ತಂದೆ ಕರ್ಣೇಶ್ವರ ತುಡು ಮಾತನಾಡಿ, ಜೀನ್ಸ್ ಪ್ಯಾಂಟ್ ಹಾಕುವ ವಿಚಾರದಲ್ಲಿ ಮಗ ಮತ್ತು ಸೊಸೆ ನಡುವೆ ಜಗಳವಾಗಿತ್ತು. ಜಗಳದ ವೇಳೆ ಪತ್ನಿಯೇ ಪತಿಯನ್ನು ಚಾಕುವಿನಿಂದ ಇರಿದು ಕೊಂದಿದ್ದಾಳೆ ಎಂದು ನಡೆದ ಘಟನೆಯನ್ನು ವಿವರಿಸಿದ್ದಾರೆ. ಘಟನೆಯ ಬಗ್ಗೆ ನಮಗೆ ಮಾಹಿತಿ ಬಂದಿದೆ. ಪತಿ ಧನಬಾದ್‌ನಲ್ಲಿ ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದ್ದರಿಂದ, ಧನ್‌ಬಾದ್‌ನಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಜಮ್ತಾರಾ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಅಬ್ದುಲ್ ರೆಹಮಾನ್ ಹೇಳಿದ್ದಾರೆ. ಪೊಲೀಸರು ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದ್ದಾರೆ.

flash24x7.com

Tousif M Mulla National President public Rights Cell International Humanity Rights & Media Organizationn Karnataka Human Rights Awareness Forum Mumbai Karnataka Mainorite President Karnataka Human Rights Panel Belagavi District Vice President 99Indianews Belagavi District Reporter Indian News Voice Of Nation INVN News

Related Articles

Leave a Reply

Your email address will not be published. Required fields are marked *

error: Content is protected !!
%d bloggers like this: