fbpx
Karnataka NewsLatestTips

ಬೆಳಗಾವಿ: ಮಹಾನಗರ ಪಾಲಿಕೆ ‘ಆಪರೇಷನ್‌ ಡಾಗ್‌’ ಆರಂಭ

ಬೆಂಗಳೂರಿನ ಗುತ್ತಿಗೆದಾರರೊಬ್ಬರಿಗೆ ಇದರ ಟೆಂಡರ್ ನೀಡಲಾಗಿದ್ದು 'ಪೆಟ್‌ ಟ್ರ್ಯಾಕರ್‌' ಬಳಸಿ ನಾಯಿಗಳನ್ನು ಹಿಡಿಯಲಾಗುತ್ತಿದೆ.

ಬೆಳಗಾವಿ: ನಗರದಲ್ಲಿ ಬೀದಿನಾಯಿಗಳ ಉಪಟಳ ತಪ್ಪಿಸುವ ಉದ್ದೇಶದಿಂದ, ಮಹಾನಗರ ಪಾಲಿಕೆ ‘ಆಪರೇಷನ್‌ ಡಾಗ್‌’ ಆರಂಭಿಸಿದೆ.

ಇದಕ್ಕಾಗಿ ಐದು ತಂಡಗಳನ್ನು ಸಿದ್ಧ ಮಾಡಲಾಗಿದ್ದು, ಮೂರು ದಿನಗಳಿಂದ ಕಾರ್ಯಾಚರಣೆ ನಡೆದಿದೆ.

ಬೆಂಗಳೂರಿನ ಗುತ್ತಿಗೆದಾರರೊಬ್ಬರಿಗೆ ಇದರ ಟೆಂಡರ್ ನೀಡಲಾಗಿದ್ದು ‘ಪೆಟ್‌ ಟ್ರ್ಯಾಕರ್‌’ ಬಳಸಿ ನಾಯಿಗಳನ್ನು ಹಿಡಿಯಲಾಗುತ್ತಿದೆ.

ಬೆಳಗಾವಿ ತಾಲ್ಲೂಕಿನ ಪಂತ ಬಾಳೇಕುಂದ್ರಿಯಲ್ಲಿ ಎರಡು ವರ್ಷಗಳ ಹಿಂದೆ ಬೀದಿನಾಯಿಗಳು ಕಚ್ಚಿದ್ದರಿಂದ ಎಳೆಯ ಮಗು ಸಾವನ್ನಪ್ಪಿತ್ತು. ಈ ಕುರಿತು ಈಚೆಗೆ ತೀರ್ಪು ನೀಡಿದ ಹೈಕೋರ್ಟ್‌, ಮಗುವಿನ ಪಾಲಕರಿಗೆ ₹ 10 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿದೆ. ಅಲ್ಲದೇ, ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ಅಪಾಯ ಮಾಡುವ ನಾಯಿಗಳನ್ನು ಹಿಡಿಯುವಂತೆಯೂ ಮಹಾನಗರ ಪಾಲಿಕೆಗೆ ಆದೇಶ ನೀಡಿತ್ತು.

ಎರಡು ತಿಂಗಳ ಹಿಂದೆ ಎಂ.ಕೆ. ಹುಬ್ಬಳ್ಳಿಯಲ್ಲಿ ಕೂಡ 12 ಜನರಿಗೆ ನಾಯಿ ಕಚ್ಚಿತ್ತು. ಕಳೆದ ಮೂರು ವರ್ಷಗಳಿಂದಲೂ ನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಿಲ್ಲ. ಇದರಿಂದಾಗಿ ಅವುಗಳ ಸಂಖ್ಯೆ ಮಿತಿಮೀರಿದೆ. ಹಲವು ಮಕ್ಕಳು, ಮಹಿಳೆಯರು, ವೃದ್ಧರಿಗೂ ಕಚ್ಚಿದ ಉದಾಹರಣೆಗಳು ಇವೆ.

ಹೀಗಾಗಿ, ಬೀದಿನಾಯಿಗಳನ್ನು ಹಿಡಿಯುವಂತೆ ಶಾಸಕರು ಸಹ ಪಾಲಿಕೆ ಅಧಿಕಾರಿಗಳಿಗೆ ಮೇಲಿಂದ ಮೇಲೆ ಸೂಚನೆ ನೀಡಿದ್ದರು.

ಈ ಎಲ್ಲದರ ಹಿನ್ನೆಲೆಯಲ್ಲಿ ‘ಆಪರೇಷನ್‌ ಡಾಗ್‌’ಗೆ ಪಾಲಿಕೆ ಅಧಿಕಾರಿಗಳು ಮುಂದಾಗಿದ್ದಾರೆ. ಮೊದಲ ಹಂತದಲ್ಲಿ ನಾಯಿಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಆರಂಭಿಸಲಾಗಿದೆ.

‘2016-17ರಲ್ಲಿ ಸಮಾರು 16 ಸಾವಿರಕ್ಕೂ ಹೆಚ್ಚು ಬೀದಿ ನಾಯಿಗಳು ನಗರದಲ್ಲಿ ಇವೆ ಎಂದು ವರದಿ ನೀಡಲಾಗಿದೆ. ಈಗ ಇನ್ನೂ ಎರಡು ಸಾವಿರ ಹೆಚ್ಚಾಗಿರುವ ಸಾಧ್ಯತೆ ಇದೆ. ಕೇವಲ ಹೆಣ್ಣು ನಾಯಿಗಳನ್ನು ಹಿಡಿದು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನೀಡಲು ನಿರ್ದೇಶನವಿದೆ. ಆದರೆ, ಹೆಣ್ಣು ನಾಯಿಗಳನ್ನು ಹುಡುಕುತ್ತ ಕುಳಿತುಕೊಳ್ಳುವ ಬದಲು ಸಿಕ್ಕ ನಾಯಿಗಳನ್ನೆಲ್ಲ ಒಯ್ಯಲಾಗುತ್ತಿದೆ. ಅಪಾಯಕಾರಿಯಾದ ನಾಯಿಗಳನ್ನು ಕೊಲ್ಲಲು ನಿಯಮಗಳಿವೆ. ಅಗತ್ಯವಿದ್ದರೆ ಮಾತ್ರ ಈ ಕ್ರಮಕ್ಕೆ ಮುಂದಾಗಲಾಗುವುದು. ಇಲ್ಲದಿದ್ದರೆ ‘ಎಬಿಸಿ’ ಕೇಂದ್ರದಲ್ಲಿ ಮೂರು ದಿನ ಇಟ್ಟುಕೊಂಡು, ಚಿಕಿತ್ಸೆ ನೀಡಿ ಬಿಡಲಾಗುವುದು. ನಾಯಿಗಳನ್ನು ಎಲ್ಲಿಂದ ತರಲಾಗಿದೆಯೋ ಅಲ್ಲಿಗೇ ಮರಳಿ ಬಿಡಬೇಕು ಎಂಬ ನಿಯಮವಿದೆ’ ಎಂದು ಹಾನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ.ಸಂಜಯ ಡುಮ್ಮಗೋಳ ಮಾಹಿತಿ ನೀಡಿದರು.

 

ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯ ನಿಯಮದಂತೆ ನಾಯಿಗಳನ್ನು ಹಿಡಿಯಲಾಗುತ್ತಿದೆ. ಪ್ರತಿ ನಾಯಿ ಹಿಡಿದು, ಶಸ್ತ್ರಚಿಕಿತ್ಸೆ ನೀಡಲು ₹ 1590 ದರ ನಿಗದಿ ಮಾಡಲಾಗಿದೆ. ಕಾರ್ಯಾಚರಣೆ ನಿರಂತರ ನಡೆಯಲಿದೆ ಎಂದು ಪಾಲಿಕೆ ಆಯುಕ್ತ ಡಾ.ರುದ್ರೇಶ ಘಾಳಿ  ಪ್ರತಿಕ್ರಿಯೆ ನೀಡಿದರು

flash24x7.com

Tousif M Mulla National President public Rights Cell International Humanity Rights & Media Organizationn Karnataka Human Rights Awareness Forum Mumbai Karnataka Mainorite President Karnataka Human Rights Panel Belagavi District Vice President 99Indianews Belagavi District Reporter Indian News Voice Of Nation INVN News

Related Articles

Leave a Reply

Your email address will not be published. Required fields are marked *

error: Content is protected !!
%d bloggers like this: