fbpx
Karnataka NewsNational

ರಾಷ್ಟ್ರಪತಿ ಕೋವಿಂದ್‌ಗೆ ಬೀಳ್ಕೊಡುಗೆ ಕಾರ್ಯಕ್ರಮ ಸಂಸತ್‌ ಪ್ರಜಾಪ್ರಭುತ್ವದ ದೇಗುಲ ಎಂದ ರಾಷ್ಟ್ರಪತಿ ರಾಮನಾಥ ಕೋವಿಂದ್‌

ನವದೆಹಲಿ: ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರ ಅಧಿಕಾರಾವಧಿ ಭಾನುವಾರ ಮುಕ್ತಾಯವಾಗಲಿದ್ದು, ಶನಿವಾರ ಸಂಸತ್‌ ಭವನದಲ್ಲಿ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ನಡೆಸಲಾಗಿದೆ. ಅದರಲ್ಲಿ ಮಾತನಾಡಿದ ಕೋವಿಂದ್‌ ಅವರು, ಸಂಸತ್ತನ್ನು ಪ್ರಜಾಪ್ರಭುತ್ವದ ದೇಗುಲ ಎಂದು ಕರೆದಿದ್ದಾರೆ.

 

“ದೇಶದ ಹಿತಾಸಕ್ತಿಯ ದೃಷ್ಟಿಯಿಂದಾಗಿ ಎಲ್ಲ ಪಕ್ಷಗಳು ಪಕ್ಷಪಾತ ರಾಜಕಾರಣವನ್ನು ಬಿಡಬೇಕು. ದೇಶದ ಜನರ ಅಭಿವೃದ್ಧಿಗಾಗಿ ಕೆಲಸ ಮಾಡಬೇಕು’ ಎಂದು ಅವರು ಎಲ್ಲ ರಾಜಕೀಯ ಪಕ್ಷಗಳಿಗೆ ಕರೆ ನೀಡಿದ್ದಾರೆ.

“ಸಂಸತ್ತಿನಲ್ಲಿ ಚರ್ಚೆ ನಡೆಸುವಾಗ ಪ್ರತಿಯೊಬ್ಬ ಸಂಸದರು ಗಾಂಧಿ ತತ್ವವನ್ನು ಪಾಲಿಸಬೇಕು. ಶಾಂತಿಯುತವಾಗಿ ಚರ್ಚೆಗಳು ನಡೆಯಬೇಕು’ ಎಂದು ಅವರು ಸಂಸದರಿಗೆ ಕಿವಿ ಮಾತನ್ನು ಹೇಳಿದ್ದಾರೆ.

ಕೋವಿಂದ್‌ ಅವರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ ಮತ್ತು ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಭಾಗವಹಿಸಿದ್ದರು. ಸಂಸತ್ತಿನ ಸದಸ್ಯರೂ ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 15ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ದ್ರೌಪದಿ ಮುರ್ಮು ಅವರು ಸೋಮವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

“ಸಿಹಿ ಸುದ್ದಿ ತಿಳಿಸಲು ನೆಟ್‌ವರ್ಕ್‌ ಅಡ್ಡಿ’
   - ಮುರ್ಮುಗೆ ಕರೆ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ!
– ರಾಷ್ಟ್ರಪತಿ ಅಭ್ಯರ್ಥಿಯಾಗಿರುವುದನ್ನು ತಿಳಿಸಲು ಮಾಡಲಾಗಿದ್ದ ಕರೆ!
ನಿಯೋಜಿತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆಯಾದ ಕ್ಷಣದ ರೋಚಕ ಸನ್ನಿವೇಶವನ್ನು ಅವರ ಮಾಜಿ ಆಪ್ತ ಕಾರ್ಯದರ್ಶಿ ಬಣ್ಣಿಸಿದ್ದಾರೆ.

ಜೂ.21ರಂದು ಬಿಜೆಪಿ ಸಂಸದೀಯ ಮಂಡಳಿ ಸಭೆ ನಡೆಸಿ, ಮುರ್ಮು ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿತು. ಈ ವಿಚಾರವಾಗಿ ಪ್ರಧಾನಿ ಮೋದಿಯವರು ಮುರ್ಮು ಅವರಿಗೆ ಕರೆ ಮಾಡಿ ತಿಳಿಸುವುದಕ್ಕೆ ಪ್ರಯತ್ನಿಸಿದ್ದಾರೆ. ಆದರೆ ಮುರ್ಮು ಅವರಿದ್ದ ರಾಯರಂಗಪುರದಲ್ಲಿ ನೆಟ್‌ವರ್ಕ್‌ ಸಮಸ್ಯೆಯಿಂದಾಗಿ ಅವರಿಗೆ ಕರೆ ಕನೆಕ್ಟ್ ಆಗಿರಲಿಲ್ಲ.

ನಂತರ ಪ್ರಧಾನಿ ಕಚೇರಿಯಿಂದ ಮುರ್ಮು ಅವರ ಮಾಜಿ ಆಪ್ತ ಕಾರ್ಯದರ್ಶಿ ಬಿಕಾಸ್‌ ಚಂದ್ರ ಮಹಂತೋ ಅವರಿಗೆ ಕರೆ ಮಾಡಲಾಗಿದೆ. “ಪಿಎಂ ಮೋದಿ ಮುರ್ಮು ಅವರೊಂದಿಗೆ ಮಾತನಾಡಬೇಕು. ಬೇಗ ಅವರಿಗೆ ಫೋನ್‌ ಕೊಡಿ’ ಎಂದು ಕಚೇರಿಯ ಸಿಬ್ಬಂದಿ ಬಿಕಾಸ್‌ಗೆ ತಿಳಿಸಿದ್ದಾರೆ.

ಅಂಗಡಿಯಲ್ಲಿದ್ದ ಬಿಕಾಸ್‌, ಬೈಕ್‌ನಲ್ಲಿ ಮುರ್ಮು ಅವರ ಮನೆಗೆ ಹೋಗಿ ಅವರ ಕೈಗೆ ಫೋನ್‌ ಕೊಟ್ಟಿದ್ದಾರೆ. ರಾತ್ರಿಯ ಊಟ ಮಾಡುತ್ತಾ ಕುಳಿತಿದ್ದ ಮುರ್ಮು ಅವರಿಗೆ ಸ್ವತಃ ಮೋದಿ ಅವರೇ ವಿಚಾರ ತಿಳಿಸಿದ್ದಾರೆ. ನಂತರ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಕೂಡ ಕರೆ ಮಾಡಿ ಮಾತನಾಡಿದ್ದಾರೆ ಎಂದು ಬಿಕಾಸ್‌ ತಿಳಿಸಿದ್ದಾರೆ.

flash24x7.com

Tousif M Mulla National President public Rights Cell International Humanity Rights & Media Organizationn Karnataka Human Rights Awareness Forum Mumbai Karnataka Mainorite President Karnataka Human Rights Panel Belagavi District Vice President 99Indianews Belagavi District Reporter Indian News Voice Of Nation INVN News

Related Articles

Leave a Reply

Your email address will not be published. Required fields are marked *

error: Content is protected !!
%d bloggers like this: