fbpx
Crime NewsKarnataka News

ರೌಡಿ ಹಂದಿ ಅಣ್ಣಿ ಹತ್ಯೆ ಹಿಂದಿನ ಕಾರಣ ಬಾಯ್ಬಿಟ್ಟ ಆರೋಪಿಗಳು

ಶಿವಮೊಗ್ಗದ ರೌಡಿ ಹಂದಿ ಅಣ್ಣಿ ಕೊಲೆ ಪ್ರಕರಣ- 2018ರಲ್ಲಿ ನಡೆದಿದ್ದ ಬಾಲು ಹತ್ಯೆಗೆ ರಿವೆಂಜ್​- ಕಾರಣ ಬಿಚ್ಚಿಟ್ಟ ಆರೋಪಿಗಳು

ಶಿವಮೊಗ್ಗ: ಕಳೆದ ಜುಲೈ 14ರಂದು ಶಿವಮೊಗ್ಗದ ವಿನೋಬನಗರ ಪೊಲೀಸ್ ಚೌಕಿ ವೃತ್ತದಲ್ಲಿ ಕುಖ್ಯಾತ ರೌಡಿ ಹಂದಿ ಅಣ್ಣಿ ಅಲಿಯಾಸ್ ಅಣ್ಣಪ್ಪ ಬರ್ಬರವಾಗಿ ಕೊಲೆಯಾಗಿದ್ದ.

ಈ ಪ್ರಕರಣದ ತನಿಖೆ ಚುರುಕುಗೊಂಡಿದೆ. ಹಂದಿ ಅಣ್ಣಿ ಹಾಗೂ ಕಾಡಾ ಕಾರ್ತಿಕ್ ನಡುವಿನ ವೈಷಮ್ಯವೇ ಕೊಲೆಗೆ ಕಾರಣ ಎಂಬ ವಿಚಾರ ತನಿಖೆ ವೇಳೆ ತಿಳಿದುಬಂದಿದೆ.

 

ಹಂದಿ ಅಣ್ಣಿ ಕೊಲೆ ಪ್ರಕರಣ-ಎಸ್ಪಿ ಮಾಹಿತಿ ನೀಡಿರುವುದುತನ್ನ ಸ್ನೇಹಿತನೊಂದಿಗೆ ಬೈಕ್​ನಲ್ಲಿ ಬರುತ್ತಿದ್ದ ಹಂದಿ ಅಣ್ಣಿಯನ್ನು ಕಾರ್​ನಲ್ಲಿ ಹಿಂಬಾಲಿಸಿ ಬಂದಿದ್ದ 8 ಮಂದಿ ದುಷ್ಕರ್ಮಿಗಳು, ಪೊಲೀಸ್ ಠಾಣೆಯಿಂದ ನೂರು ಮೀಟರ್ ಅಂತರದಲ್ಲೇ ಜನರ ಮಧ್ಯೆಯೇ ಅಟ್ಟಾಡಿಸಿ ಲಾಂಗು ಮಚ್ಚಿನಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದರು. ಈ ದುಷ್ಕರ್ಮಿಗಳ ಪತ್ತೆಗೆ ಶಿವಮೊಗ್ಗ ಪೊಲೀಸರು ತಂಡ ಕಟ್ಟಿಕೊಂಡು ಹುಡುಕಾಟ ನಡೆಸುತ್ತಿರುವಾಗಲೇ 8 ಆರೋಪಿಗಳು ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಗೆ ಹೋಗಿ ಶರಣಾಗುವ ಮೂಲಕ ಪೊಲೀಸರಿಗೂ ಶಾಕ್ ನೀಡಿದ್ದರು. ಚಿಕ್ಕಮಗಳೂರು ಪೊಲೀಸರಿಂದ ಆರೋಪಿಗಳನ್ನು ವಶಕ್ಕೆ ಪಡೆದಿರುವ ಶಿವಮೊಗ್ಗ ಪೊಲೀಸರು ತೀವ್ರ ವಿಚಾರಣೆ ಆರಂಭಿಸಿದ್ದು, ಆರೋಪಿಗಳು ಕೊಲೆಯ ಹಿಂದಿನ ಕಾರಣವನ್ನು ಬಾಯ್ಬಿಟ್ಟಿದ್ದಾರೆ.

 ಹಂದಿ ಅಣ್ಣಿ ಕೊಲೆ ಆರೋಪಿಗಳುಆರೋಪಿಗಳ ವಿಚಾರಣೆ: ಕೊಲೆ ಆರೋಪಿಗಳಾದ ಕಾಡಾ ಕಾರ್ತಿಕ್ ಅಲಿಯಾಸ್ ಕಾರ್ತಿಕ್, ನಿತಿನ್ ಅಲಿಯಾಸ್ ಭಜರಂಗಿ ಬಾಯ್, ಫಾರುಕ್, ಮಧು, ಆಂಜನೇಯ, ಚಂದನ್, ಮದನ್ ರಾಯ್, ಮಧುಸೂದನ್ ಅವರನ್ನು ಪೊಲೀಸರು ಶಿವಮೊಗ್ಗದ 5ನೇ ಜೆಎಂಎಫ್​ಸಿ ಕೋರ್ಟ್​ಗೆ ಹಾಜರು ಪಡಿಸಿದ್ದರಲ್ಲದೇ ಹೆಚ್ಚಿನ ವಿಚಾರಣೆಗೆ ಅವಕಾಶ ನೀಡುವಂತೆ ಕಾಲಾವಕಾಶ ಕೋರಿದ್ದರು. ಅದರಂತೆ ನ್ಯಾಯಾಲಯ 8 ದಿನಗಳ ಕಾಲ ಶಿವಮೊಗ್ಗ ಪೊಲೀಸರ ವಶಕ್ಕೆ ನೀಡಿದೆ. ಕೃತ್ಯಕ್ಕೆ ಬಳಸಿದ್ದ ಮೊಬೈಲ್, ವಾಹನ, ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದು ಆರೋಪಿಗಳ ವಿಚಾರಣೆ ಆರಂಭಿಸಿದ್ದಾರೆ.

 ಹಂದಿ ಅಣ್ಣಿ ಕೊಲೆ ಆರೋಪಿಗಳುಕೊಲೆಗೆ ಕಾರಣ: ಹಂದಿ ಅಣ್ಣಿ ಹಾಗೂ ಕಾಡಾ ಕಾರ್ತಿಕ್ ನಡುವಿನ ವೈಷಮ್ಯವೇ ಕೊಲೆಗೆ ಕಾರಣ ಎಂಬ ಸತ್ಯ ವಿಚಾರಣೆ ವೇಳೆ ಹೊರಬಿದ್ದಿದೆ. 2018ರಲ್ಲಿ ಶಿವಮೊಗ್ಗದ ಹಾತಿನಗರ ಬಳಿ ರೌಡಿ ಶೀಟರ್ ಬಂಕ್ ಬಾಲುವನ್ನು ಕೊಲೆ ಮಾಡಲಾಗಿತ್ತು. ಬಾಲು ಕೊಲೆಯಾಗುವ ಸಂದರ್ಭದಲ್ಲಿ ಕಾಡಾ ಕಾರ್ತಿಕ್ ಸಹ ಜೊತೆಗಿದ್ದನಲ್ಲದೇ ಅಂದೇ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಪ್ರಮಾಣ ಸಹ ಮಾಡಿದ್ದ. ಅಂದಿನಿಂದ ಪ್ರತೀಕಾರಕ್ಕೆ ಕಾಯುತ್ತಿದ್ದ ಬಾಲು ಸಹಚರರಾದ ಕಾರ್ತಿಕ್, ಫಾರುಕ್, ನಿತಿನ್ ಹಾಗೂ ಮಧು ಸಮಯ ನೋಡಿ ಹಂದಿ ಅಣ್ಣಿಯನ್ನು ಹತ್ಯೆ ಮಾಡಿದ್ದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎನ್ನಲಾಗ್ತಿದೆ.

 

ಬಂಕ್ ಬಾಲು ಕೊಲೆ ನಂತರದಲ್ಲಿ ಕಾರ್ತಿಕ್ ಹಾಗೂ ಹಂದಿ ಅಣ್ಣಿ ನಡುವೆ ವೈಷಮ್ಯ ಹೆಚ್ಚಾಗಿತ್ತು. ಶಿವಮೊಗ್ಗಕ್ಕೆ ಬಂದರೆ ನಿನ್ನನ್ನು ಬಿಡಲ್ಲ ಎಂದು ಕಾಡಾ ಕಾರ್ತಿಕ್​ಗೆ ಅಣ್ಣಿ ವಾರ್ನಿಂಗ್ ಮಾಡಿದ್ದನಂತೆ. ಅಂದಿನಿಂದ ಬೆಂಗಳೂರಿನ ಸುತ್ತಮುತ್ತ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದ ಕಾರ್ತಿಕ್​ನನ್ನು ತಂಗಿಯ ಮದುವೆ ಸಮಯದಲ್ಲೂ ಶಿವಮೊಗ್ಗಕ್ಕೆ ಬರಲೂ ಸಹ ಅಣ್ಣಿ ಬಿಟ್ಟಿರಲಿಲ್ಲ. ಇದೇ ಸಿಟ್ಟಿಗೆ ಹಂದಿ ಅಣ್ಣಿಯನ್ನು ಕೊಲೆ ಮಾಡಿರುವುದಾಗಿ ಆರೋಪಿಗಳು ತಿಳಿಸಿದ್ದಾರಂತೆ.

flash24x7.com

Tousif M Mulla National President public Rights Cell International Humanity Rights & Media Organizationn Karnataka Human Rights Awareness Forum Mumbai Karnataka Mainorite President Karnataka Human Rights Panel Belagavi District Vice President 99Indianews Belagavi District Reporter Indian News Voice Of Nation INVN News

Related Articles

Leave a Reply

Your email address will not be published. Required fields are marked *

error: Content is protected !!
%d