ಜಾಮೀನಿನ ನಂತರ ಮೊಹಮ್ಮದ್ ಜುಬೈರ್ ಮೊದಲ ಟ್ವೀಟ್

ನವದೆಹಲಿ: ಸುಪ್ರೀಂ ಕೋರ್ಟ್ನಿಂದ ಜಾಮೀನು ಪಡೆದ ನಂತರ ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೈರ್ ಅವರು ಗುರುವಾರ ತಮ್ಮ ಮೊದಲ ಟ್ವೀಟ್ ಅನ್ನು ಪೋಸ್ಟ್ ಮಾಡಿದ್ದಾರೆ.
ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಉತ್ತರ ಪ್ರದೇಶದಲ್ಲಿ ದಾಖಲಾಗಿದ್ದ ಆರು ಪ್ರಕರಣಗಳಿಗೆ ಸಂಬಂಧಿಸಿದಂತೆ ಜುಲೈ 20ರಂದು ಜುಬೈರ್ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿತ್ತು.
Jo aaj sahib-e-masnand hai kal nahi hoge!
Thank you everyone, I am humbled and grateful for the amazing support I’ve received in the past one month from well wishers in India and from across the world. Your support gave a lot of strength to me & my family. ✊️ ❤ pic.twitter.com/fjx9iiK8Ut— Mohammed Zubair (@zoo_bear) July 28, 2022
ಪೊಲೀಸರ ವಶದಲ್ಲಿದ್ದಾಗ ತಮ್ಮ ಪರ ನಿಂತ ಹಿತೈಷಿಗಳಿಗೆ ಜುಬೈರ್ ಧನ್ಯವಾದಗಳನ್ನು ತಿಳಿಸಿದ್ದಾರೆ.
ಪ್ರಸಿದ್ಧ ಉರ್ದು ಸಾಹಿತಿ ರಾಹತ್ ಇಂದೋರಿಯವರ ಶಾಯಿರಿಯೊಂದಿಗೆ ಟ್ವೀಟ್ ಅನ್ನು ಪ್ರಾರಂಭಿಸಿರುವ ಅವರು, ‘ಇಂದು ಅಧಿಕಾರದ ಗದ್ದುಗೆಯಲ್ಲಿ ಇರುವವರು ನಾಳೆ ಇರುವುದಿಲ್ಲ. ಎಲ್ಲರಿಗೂ ಧನ್ಯವಾದಗಳು. ಕಳೆದ ಒಂದು ತಿಂಗಳಲ್ಲಿ ಭಾರತ ಸೇರಿದಂತೆ ಪ್ರಪಂಚದಾದ್ಯಂತ ಇರುವ ಹಿತೈಷಿಗಳಿಂದ ನಾನು ಅಪಾರ ಬೆಂಬಲವನ್ನು ಪಡೆದಿದ್ದೇನೆ. ನಿಮಗೆಲ್ಲ ನಾನು ಕೃತಜ್ಞನಾಗಿದ್ದೇನೆ. ನಿಮ್ಮ ಬೆಂಬಲ ನನಗೆ ಮತ್ತು ನನ್ನ ಕುಟುಂಬಕ್ಕೆ ಹೆಚ್ಚಿನ ಶಕ್ತಿಯನ್ನು ನೀಡಿದೆ’ ಎಂದು ತಿಳಿಸಿದ್ದಾರೆ.