
ಯಶಸ್ವಿ ಚಂದ್ರಯಾನ-3 ಮತ್ತು ಆದಿತ್ಯ ಎಲ್-1 ಮಿಷನ್ಗಳ ನಂತರ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ದೇಶದ ಬಾಹ್ಯಾಕಾಶ ಯಾನದ ಪ್ರಯತ್ನಗಳನ್ನು ಹೆಚ್ಚಿಸಲು ಶ್ರಮಿಸುತ್ತಿದೆ. ‘ಭೂಮಿಯ ಅವಳಿ’ ಎಂದೂ ಕರೆಯಲ್ಪಡುವ ಶುಕ್ರಗ್ರಹದ ಮೇಲೆ ಇದೀಗ ತನ್ನ ದೃಷ್ಟಿಯನ್ನು ಇರಿಸಿದೆ.
ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಅವರು ಶುಕ್ರ ಗ್ರಹಕ್ಕೆ ಮಿಷನ್ ನ್ನು ಈಗಾಗಲೇ ಸಂರಚಿಸಲಾಗಿದ್ದು, ಕೆಲವು ಪೇಲೋಡ್ಗಳು ಅಭಿವೃದ್ಧಿ ಹಂತದಲ್ಲಿವೆ ಎಂದಿದ್ದಾರೆ. ಇಸ್ರೋ ಅಧಿಕಾರಿಯೊಬ್ಬರ ಪ್ರಕಾರ, ಬಾಹ್ಯಾಕಾಶ ಸಂಸ್ಥೆಯು ಮಿಷನ್ನ ಅನುಮೋದನೆಗಾಗಿ ಕೇಂದ್ರಕ್ಕೆ ಪ್ರಸ್ತಾವನೆಯನ್ನು ಕಳುಹಿಸಲು ಯೋಜಿಸಿದೆ, ಮುಂದಿನ ವರ್ಷ ಡಿಸೆಂಬರ್ನಲ್ಲಿ ಅದನ್ನು ಪ್ರಾರಂಭಿಸಲು ಆಶಿಸುತ್ತಿದೆ.
ದೆಹಲಿಯ ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯಲ್ಲಿ ಮಾತನಾಡಿದ ಇಸ್ರೋ ಮುಖ್ಯಸ್ಥರು, ಶುಕ್ರ ಗ್ರಹದ ಅಧ್ಯಯನ ಮಾಡುವುದರಿಂದ ಶತಕೋಟಿ ವರ್ಷಗಳ ಹಿಂದೆ ಭೂಮಿಯ ಭವಿಷ್ಯವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದರು.ಶುಕ್ರವು ಬಹಳ ಆಸಕ್ತಿದಾಯಕ ಗ್ರಹವಾಗಿದೆ. ಇದು ವಾತಾವರಣವನ್ನು ಸಹ ಹೊಂದಿದೆ, ದಪ್ಪವಾಗಿದ್ದು ಮೇಲ್ಮೈಯನ್ನು ಭೇದಿಸಲಾಗುವುದಿಲ್ಲ. ಮೇಲ್ಮೈ ಗಟ್ಟಿಯಾಗಿದೆಯೇ ಅಥವಾ ಇಲ್ಲವೇ ಎಂಬುದು ನಮಗೆ ತಿಳಿದಿಲ್ಲ ಎಂದರು.
ಭಾರತದ ಶುಕ್ರ ಕಾರ್ಯಾಚರಣೆಯನ್ನು ‘ಶುಕ್ರಯಾನ್-1’ ಎಂದು ಕರೆಯಬಹುದು – ‘ಶುಕ್ರ’ ಎಂದರೆ ಶುಕ್ರ ಮತ್ತು ‘ಯಾನ’ ಎಂಬುದು ಸಂಸ್ಕೃತದಲ್ಲಿ ಕ್ರಾಫ್ಟ್ ಅಥವಾ ವಾಹನ ಎಂದರ್ಥವಾಗಿದೆ.